Tuesday, July 9, 2024

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗೆ ತರಬೇತಿಯನ್ನು ದಿನಾಂಕ 24/07/2024 ರಿಂದ 28/07/2024 ಐದು ದಿನಗಳ ವರೆಗೆ ತರಗತಿಯ ನಿರ್ವಹಣೆ ಮತ್ತು ಚಿಲಿ ಪಿಲಿ ಪ್ಲಸ್ ಪುಸ್ತಕಗಳ ಬಗ್ಗೆ ಚಟುವಟಿಕೆಗಳ ನಿರ್ವಹಣೆ ಮತ್ತು ಕೊನೆಯ ಐದನೆಯ ದಿನ ಆಯಾ ರವರಿಗೂ ತರಬೇತಿಯನ್ನು ಹಮ್ಮಿಕೊಂಡು ಮಕ್ಕಳ ಕಾಳಜಿ ಮತ್ತು ಹಿತ್ತಾಸಕ್ತಿಗಳನ್ನು ಕಾಪಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.


ಚಿತ್ತಾಪುರ ತಾಲೂಕಿನ BEO ಜಗದೇವಿ ಮೇಡಂ ಮತ್ತು BRC ಮಲ್ಲಿಕಾರ್ಜುನ ಸೇಡಂ ಸರ್ ರವರು ಅತಿಥಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ತರಬೇತಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳು.







Friday, May 31, 2024

2024 - 25 ನೇ ಸಾಲಿಸ ECC ಮತ್ತು BILINGUAL

 ದಿನಾಂಕ 31/05/2024 ರ ದಿನದಂದು GHPS ಇಂಗಳಗಿ ಶಾಲೆಯಲ್ಲಿ ECC  ಮತ್ತು BILINGUAL, GMPS ರಾವೂರ ಶಾಲೆಯಲ್ಲಿ ECC ಯನ್ನು ಪ್ರಾರಂಭ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವನ್ನು ಮು. ಗು ಸರಸ್ವತಿ ಮೇಡಂ  ವಹಿಸಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಮಾನ್ಯ BRC ಮಲ್ಲಿಕಾರ್ಜುನ ಸೇಡಂ ಸರ್ ಮತ್ತು AD MDM ಪ್ರಕಾಶ ನಾಯ್ಕೋಡಿ ಸರ್ ರವರು ಉದ್ಘಾಟಿಸಿ ECC ಯಲ್ಲಿ ಮಕ್ಕಳ LKG 4+, UKG 5+ 1 ನೇ ತರಗತಿಗೆ 5.5 or 6 ವರ್ಷ ಎಂದು ಆಯಾ ತರಗತಿಯಗೆ ಅತಿಥಿ ಶಿಕ್ಷಕರ ನೇಮಕ ಮತ್ತು ಆಯಾ ದವರ ನೇಮಕ ಯಾವ ರೀತಿ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಕಾರ್ಯ ಕ್ರಮದಲ್ಲಿ ಅತಿಥಿ ಸ್ಥಾನವನ್ನು ECC ಮತ್ತು BILINGUAL ನ ನೋಡಲ ಅಧಿಕಾರಿಗಳು ಆದಂತಹ BRP ಅಶ್ವಿನಿ ಮೇಡಂ ,CRC EAST ತಮನ್ನ ಮೇಡಂ ,CRC ತೆಂಗಳಿ ಅಂಬದಾಸ ಸರ್ , ಮುದ್ದು ಮಕ್ಕಳು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಸ್ಸುಗೊಳಿಸಿದ್ದರು







GMPS RAVOOR





Sunday, March 17, 2024

ಮಕ್ಕಳ ಸಾಹಿತ್ಯ ಸಂಭ್ರಮ

 

ಮಕ್ಕಳ ಸಾಹಿತ್ಯ ಸಂಭ್ರಮದ ಪೂರ್ವ ತಯಾರಿ


ಕಾರ್ನರ್ ನಲ್ಲಿ ಮಕ್ಕಳ ಚಟುವಟಿಕೆಗಳು




ಸಂದರ್ಶನ ಕಾರ್ನರ್.



ಕವನ  ಕಾರ್ನರ್.


ಕಥೆ ಕಾರ್ನರ್.


ಸಂಪನ್ಮೂಲ ವ್ಯಕ್ತಿಗಳು.






ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡು ಮಕ್ಕಳು.




        ಗ್ರಂಥಾಲಯ  ಬಗ್ಗೆ ಮಾಹಿತಿ.




ದಾಖಲೆಗಳು.







Friday, February 2, 2024

2023 - 24 ನೇ ಸಾಲಿನಲ್ಲಿ ಹಮ್ಮಿಕೊಂಡ ಕಲಿಕಾ ಮೇಳ

 










ಅಧ್ಯಕ್ಷ ಸ್ಥಾನ :- GMPS ರಾವೂರ ಶಾಲೆಯ HM ಮನೋಹರ ಜೋಷಿ ಸರ್

ಮುಖ್ಯ ಅತಿಥಿ ಸುಮಿತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾವೂರ

ಮುಖ್ಯ ಅತಿಥಿ :-SDMC ಅಧ್ಯಕ್ಷ ಖಾಜಾಮೀಯಾ ಸರ್

ಮುಖ್ಯ ಅತಿಥಿ :-ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ದವೀರಯ್ಯ ರುದ್ನೂರ ಸರ್

ಮುಖ್ಯ ಅತಿಥಿ :- ಕ್ಷೇತ್ರ ಸಮನ್ವಯಾಧಿಕಾರಿಗಳು ಮಲ್ಲಿಕಾರ್ಜುನ ಸೇಡಂ ಸರ್


ಅತಿಥಿಗಳು:- ಶಿವಾನಂದ್ ನಾಲ್ವರ್ ಸರ್ ಅಬ್ದುಲ್ ಸಲೀಂ ಸರ್ ಪಾಶ ಸರ್ ಶಾಬಾದ್ ವಲಯದ ಬಿ ಆರ್ ಪಿ ಅಶ್ವಿನಿ ಮೇಡಂ ಬಿ ಐ ಆರ್ ಟಿ ನಾಗೂಬಾಯಿ ಮೇಡಂ ಇಸಿಯೋ ವೆಂಕಟರಡ್ಡಿ ಸರ್ ಶೃತಿ ತರುಣ್ ಎಪಿಎಫ್ ಸಂಯೋಜಕರು ಚಿತಾಪುರ ತಾಲೂಕ.

ಪ್ರಾಸ್ತಾವಿಕ :- ಕವಿತಾ ಸಾಲೋಕಿ CRP ರಾವೂರ.

ನಿರೂಪಣೆ :- ಲಕ್ಷ್ಮೀ ಸ.ಶಿ GMPS ರಾವೂರ

ಸ್ವಾಗತ :- ಭುವನೇಶ್ವರಿ ಸ.ಶಿ GMPS ರಾವೂರ

ವಂದನಾರ್ಪಣೆ :- ಅನ್ನಪೂರ್ಣ ಸ.ಶಿ  ಯಶಸ್ವಿಗೊಳಿಸಿದರು

ರಾವೂರ್ ಮಟ್ಟದ ಕಲಿಕಾ ಮೇಳವು ಬಿ ಆರ್ ಸಿ ಸರ್ ಅವರು ಮತ್ತು ಅಧ್ಯಕ್ಷರು ಉದ್ಘಾಟನೆ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ಈ ಕಲಿಕಾ ಮೇಳವು ವಿಶೇಷತೆಯಿಂದ ಕೂಡಿದ್ದು ಪ್ರತಿ ಶಿಕ್ಷಕರಿಗೆ 15 ಮಕ್ಕಳನ್ನು ನೀಡಿ ಪ್ರತಿ ವರ್ಗದಲ್ಲಿ ಟಿಎಲ್ಎಂ ಪ್ರಸ್ತುತಪಡಿಸುವ ವಿದ್ಯಾರ್ಥಿಗಳೊಟ್ಟಿಗೆ ಸಂಭಾಷಣೆಯನ್ನು ನಡೆಸಿ ಮುಂದಿನ ವರ್ಗಕ್ಕೆ ಕರೆದುಕೊಂಡು ಪ್ರತಿವರ್ಗದ ಕಲಿಕೋಪಕರಣಗಳ ವಿಷಯದ ಬಗೆಗೆ ಮಕ್ಕಳಿಗೆ ಅರ್ಥೈಸುವ ಕೆಲಸವಾಯಿತು.

ಊಟದ ವಿರಾಮದ ನಂತರ ಶಿಕ್ಷಕರ ಸಂವಾದವನೇರ್ಪಡಿಸಿ ವಿಶಿಷ್ಟತೆಯನ್ನು ಮೆರೆಯಿತು, ರಾವೂರ ಕ್ಲಸ್ಟರ್ನ ಶಿಕ್ಷಕರು ತಮ್ಮ ಸಹೋದ್ಯೋಗಿಗಳಾದ ವಾಡಿ ಮತ್ತು ಹಲಕಟ್ಟ ಕ್ಲಸ್ಟರ್ನ ನಲಿಕಲಿ ಶಿಕ್ಷಕ ರೊಟ್ಟಿಗೆ ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಇಟ್ಟುಕೊಂಡು,ಕಲಿಕೋಪಕರಣ ಗಳ ಬಗೆಗಿನ ಉಪಯೋಗ, ವಿಷಯವಸು ಹಾಗು ಮಕ್ಕಳ ಕಲಿಕೆ ಮತ್ತು ಒಟ್ಟಾರೆ ಈ ಮೇಳದಿಂದಾದ ಕಲಿಕೆಯ ಬಗೆಗೆ ಶಿಕ್ಷಕರ ಶಿಕ್ಷಕರೊಟ್ಟಿಗೆ ಸಂವಾದ ಹಮ್ಮಿಕೊಂಡು ಸುಧೀರ್ಘವಾದ ಚರ್ಚೆ ನಡೆಯಿತು ಶಿಕ್ಷಕರ ಸಂವಾದ ಹೊಸ ಆಲೋಚನೆಗಳನ್ನ ಹೊಸ ವಿಷಯಗಳನ್ನು ತಮ್ಮ ತಮ್ಮ ಶಾಲೆಗೆ ಕೊಂಡೊಯ್ಯಲು ಸಾಧ್ಯವಾಯಿತೆನ್ನಬಹುದು ವಿಶಿಷ್ಟ ಸಂವಾದ ಯೋಜನೆ ಹಮ್ಮಿಕೊಂಡು ಯಶಸ್ವಿಗೊಳಿಸಿದರು ಕವಿತಾ ಮತ್ತು ಶ್ರುತಿ ಅವರು ಸಂತಸ ವ್ಯಕ್ತಪಡಿಸಿದರು.

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...