ದಿನಾಂಕ 18. 08.2023ರ ಶುಕ್ರವಾರ ದಿನದಂದು ಜಿಲ್ಲಾ ಹಂತದ ಅಧಿಕಾರಿಗಳು ಆದಂತಹ ಡಿ ಡಿ ಪಿ ಐ ಅಭಿವೃದ್ಧಿ ಡಯಟ್ ಕಮಲಾಪುರ ಪ್ರಾಂಶುಪಾಲರು ಆದಂತಹ ಬಸವರಾಜ್ ಮಾಯಾಚಾರ್ಯ ಸರ್ ರವರು ಬೆಳಿಗ್ಗೆ ಪ್ರಾರ್ಥನಾ ಸಮಯಕ್ಕೆ ಹಾಜರಾಗಿ ಎಲ್ಲಾ ತರಗತಿಯ ವೀಕ್ಷಣೆಯನ್ನು ಮಾಡಿದರು ಮೊದಲು ನಲಿ ಕಲಿ ತರಗತಿಗೆ ಹೋಗಿ ನಲಿ-ಕಲಿ ತರಗತಿಯ ಮಕ್ಕಳ ಕಲಿಕಾ ಸಾಮರ್ಥ್ಯಗಳ ಬಗ್ಗೆ ಮತ್ತು ಮಕ್ಕಳಿಗೆ ಯಾವ ಚಟುವಟಿಕೆಗಳನ್ನು ಹಾಕಿಕೊಂಡರೆ ಅವರು ಕಲಿಕಾಫಲವನ್ನು ತಲುಪಲು ಸಾಧ್ಯ ಎಂಬುವುದರ ಬಗ್ಗೆ ಎಂಬುದರ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನವನ್ನು ಮಾಡಿದರು. ನಂತರ ಮಕ್ಕಳು ಅಕ್ಷರಗಳನ್ನು ಪದಗಳನ್ನು ಗುರುತಿಸಿದ್ದನ್ನು ನೋಡಿ ಮಕ್ಕಳ ಪ್ರಗತಿಯನ್ನು ಕಂಡು ಅವರಿಗೆ ತುಂಬಾ ಸಂತೋಷವಾಯಿತುನಂತರ ಸರ್ ರವರು 4ನೇ ತರಗತಿ 5ನೇ ತರಗತಿ 6ನೇ ತರಗತಿ ಮತ್ತು 7ನೇ ತರಗತಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆತರಗತಿ ವೀಕ್ಷಣೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಿದರು.
ಡಯಟ್ ಉಪನ್ಯಾಸಕರು ಆದಂತಹ ಮಲ್ಲಿನಾಥ್ ಸರ್ ಅವರು ಜಿಎಲ್ಪಿಎಸ್ ರಾವೂಲ್ ಪೇಟ್ ಶಾಲೆಯನ್ನು ನ್ನು ಭೇಟಿ ಮಾಡಿತರಗತಿಯ ವೀಕ್ಷಣೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಿದರು.
ಡಯಟ್ ಉಪನ್ಯಾಸಕರು ಆದಂತಹ ರಾಜಶೇಖರ್ ಗೋಸಾಲ್ ಸರ್ ಅವರು ಜಿ ಎಚ್ ಎಸ್ ರಾವೂರ ಶಾಲೆಗೆ ಭೇಟಿ ಮಾಡಿ ತರಗತಿಯ ವೀಕ್ಷಣೆಯನ್ನು ಮಾಡಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು.
ಡಯಟ್ ಉಪನ್ಯಾಸಕರು ಆದಂತಹ ಮಹಮ್ಮದ್ ಯೂಸುಫ್ ಸರ್ ಅವರು ಜಿ ಎಲ್ ಪಿ ಎಸ್ ರಾವೂರ ಶಾಲೆಗೆ ಭೇಟಿ ಮಾಡಿ ತರಗತಿಯ ವೀಕ್ಷಣೆಯನ್ನು ಮಾಡಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು.