Friday, August 18, 2023

ಜಿಲ್ಲಾ ಹಂತದ ಅಧಿಕಾರಿಗಳ ಭೇಟಿ.

 ದಿನಾಂಕ 18. 08.2023ರ ಶುಕ್ರವಾರ ದಿನದಂದು ಜಿಲ್ಲಾ ಹಂತದ ಅಧಿಕಾರಿಗಳು ಆದಂತಹ ಡಿ ಡಿ ಪಿ ಐ ಅಭಿವೃದ್ಧಿ ಡಯಟ್  ಕಮಲಾಪುರ ಪ್ರಾಂಶುಪಾಲರು ಆದಂತಹ ಬಸವರಾಜ್ ಮಾಯಾಚಾರ್ಯ ಸರ್ ರವರು ಬೆಳಿಗ್ಗೆ ಪ್ರಾರ್ಥನಾ ಸಮಯಕ್ಕೆ ಹಾಜರಾಗಿ ಎಲ್ಲಾ ತರಗತಿಯ ವೀಕ್ಷಣೆಯನ್ನು ಮಾಡಿದರು ಮೊದಲು ನಲಿ ಕಲಿ ತರಗತಿಗೆ ಹೋಗಿ ನಲಿ-ಕಲಿ ತರಗತಿಯ ಮಕ್ಕಳ ಕಲಿಕಾ ಸಾಮರ್ಥ್ಯಗಳ ಬಗ್ಗೆ ಮತ್ತು ಮಕ್ಕಳಿಗೆ ಯಾವ ಚಟುವಟಿಕೆಗಳನ್ನು ಹಾಕಿಕೊಂಡರೆ ಅವರು ಕಲಿಕಾಫಲವನ್ನು ತಲುಪಲು ಸಾಧ್ಯ ಎಂಬುವುದರ ಬಗ್ಗೆ ಎಂಬುದರ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನವನ್ನು ಮಾಡಿದರು. ನಂತರ ಮಕ್ಕಳು ಅಕ್ಷರಗಳನ್ನು ಪದಗಳನ್ನು ಗುರುತಿಸಿದ್ದನ್ನು ನೋಡಿ ಮಕ್ಕಳ ಪ್ರಗತಿಯನ್ನು ಕಂಡು ಅವರಿಗೆ ತುಂಬಾ ಸಂತೋಷವಾಯಿತುನಂತರ ಸರ್ ರವರು 4ನೇ ತರಗತಿ 5ನೇ ತರಗತಿ 6ನೇ ತರಗತಿ ಮತ್ತು 7ನೇ ತರಗತಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆತರಗತಿ ವೀಕ್ಷಣೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಿದರು.






ಡಯಟ್ ಉಪನ್ಯಾಸಕರು ಆದಂತಹ ಮಲ್ಲಿನಾಥ್ ಸರ್ ಅವರು ಜಿಎಲ್‌ಪಿಎಸ್ ರಾವೂಲ್ ಪೇಟ್ ಶಾಲೆಯನ್ನು ನ್ನು ಭೇಟಿ ಮಾಡಿತರಗತಿಯ ವೀಕ್ಷಣೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಿದರು.




ಡಯಟ್ ಉಪನ್ಯಾಸಕರು ಆದಂತಹ ರಾಜಶೇಖರ್ ಗೋಸಾಲ್ ಸರ್ ಅವರು ಜಿ ಎಚ್ ಎಸ್ ರಾವೂರ ಶಾಲೆಗೆ ಭೇಟಿ ಮಾಡಿ ತರಗತಿಯ ವೀಕ್ಷಣೆಯನ್ನು ಮಾಡಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು.


ಡಯಟ್ ಉಪನ್ಯಾಸಕರು ಆದಂತಹ ಮಹಮ್ಮದ್ ಯೂಸುಫ್ ಸರ್ ಅವರು ಜಿ ಎಲ್ ಪಿ ಎಸ್ ರಾವೂರ ಶಾಲೆಗೆ ಭೇಟಿ ಮಾಡಿ ತರಗತಿಯ ವೀಕ್ಷಣೆಯನ್ನು ಮಾಡಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು.



P .M ಪೋಷಣಾ ಶಕ್ತಿ ನಿರ್ಮಾಣ ಯೋಜನೆ

 ದಿನಾಂಕ 16.08.2023 ದಿನದಂದು  ಬೆಂಗಳೂರಿನ ರಾಜ್ಯ ಶಿಕ್ಷಕರ ಶಿಕ್ಷಣ ಕಲ್ಯಾಣ ನಿಧಿ ಸ್ಥಳದಲ್ಲಿ ADPI ಮತ್ತುಆಯ್ತಾ ಐದು ಜನ ಸಿಆರ್ಪಿ ಅವರಿಗೆ  ಒಂದು ದಿನದ ತರಬೇತಿಯನ್ನು ಆಯೋಜನೆ ಮಾಡಲಾಗಿತ್ತು. ಈ ತರಬೇತಿಯಲ್ಲಿ ಚರ್ಚಿಸಿರುವಂತಹ ವಿಷಯ ವಸ್ತು ಈ ಕೆಳಗಿನಂತಿವೆ.

* ಈ ಒಂದು ದಿನದ ತರಬೇತಿಯಲ್ಲಿ ಮುಖ್ಯ ಶಿಕ್ಷಕರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ಅವರು ಶಾಲೆಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಮತ್ತು ಆಹಾರ ಧಾನ್ಯಗಳನ್ನು ಯಾವ ರೀತಿಯಾಗಿ ಸಂರಕ್ಷಣೆಯಾಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರವಾಗಿ ಮಾಹಿತಿಯನ್ನು ನೀಡಿದರು.




ಜಂಟಿ ನಿರ್ದೇಶಕರಾದ ಅನಿತಾ ಮೇಡಂ ರವರು ವಿಷ ವಸ್ತುವಿನ ಬಗ್ಗೆ ತರಬೇತಿ ನೀಡಿದ ಕ್ಷಣಗಳು.



ಚಿತ್ತಾಪುರ ತಾಲೂಕಿನ  ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯಲ್ಲಿ ಪಾಲ್ಗೊಂಡಂತಹ ತಂಡ.



 

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...